‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ವೀಟ್ ರಸ್ಟ್
ಸಸ್ಯಗಳಿಗೆ ತಗಲುವ ರೋಗಗಳನ್ನು ಹೇಗೆ ನಿಯಂತ್ರಿಸ ಬಹುದು?
ಕಾಣುವ ಸಸ್ಯಗಳ ಯಾವುದೇ ಅಂಗಕ್ಕೆ ತಗುಲ ಬಹುದು. ಈ ರೋಗ ಹಿಡಿದರೆ, ಸಸ್ಯಭಾಗಗಳ ಮೇಲೆ ಸಣ್ಣ, ದುಂಡನೆ, ಹಳದಿ ಚುಕ್ಕಿಗಳು ಮೂಡುತ್ತವೆ.
ಈ ಪ್ರದರ್ಶಿಕೆಯಲ್ಲಿ, ಜಾನ್ ಇನ್ನ್ಸ್ ಸೆಂಟರ್ ನ ಡಯಾನೆ ಸಾಂಡರ್ಸ್ ಮತ್ತು ತಂಡದವರು, ಸೂಕ್ಷ್ಮ ದರ್ಶಕದ ಮೂಲಕ ಈ ರೋಗಾಣುವಿನ ಸುಂದರ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ವಂಶವಾಹಕಗಳ ಸರಣಿ ಸೃಜಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಡಯಾನೆ ಮತ್ತು ತಂಡದವರು “ಮೊಬೈಲ್ ಆಂಡ್ ರಿಯಲ್ ಟೈಮ್ ಪ್ಲಾಂಟ್ ಡಿಸೀಸ್ ಡಯಾಗ್ನಾಸ್ಟಿಕ್ಸ್” ಎಂಬ ವೀಕ್ಷಕ ತಂತ್ರವನ್ನು ರೂಪಿಸಿ, ಕೃಷಿ ಭೂಮಿಯಿಂದ ವೀಟ್ ರಸ್ಟ್ ರೋಗಾಣುಗಳ ನಮೂನೆಗಳನ್ನು ಸಂಗ್ರಹಿಸಿದ 48 ಗಂಟೆಗಳಲ್ಲಿ, ರೋಗಾಣುವಿನ ಪ್ರತೇಕ ಎಳೆಯನ್ನು ಅಂಕಿತಗೊಳಿಸ ಬಹುದು ಎಂದು ಸ್ಪಷ್ಟ ಪಡಿಸಿದ್ದಾರೆ.
ಬ್ಯಾನರ್ ಆಕೃತಿ: ಗೋದಿಯ ಎಲೆಯ ಹೊರ ಪದರವನ್ನು ಸೀಳುತ್ತಾ ಒಳಗಿಂದ ಹೊರಕ್ಕೆ ಆವರಿಸುತ್ತಿರುವ ಹಳದಿ ಬಣ್ಣದ ರಸ್ಟ್ ರೋಗಾಣುವಿನ ಕಣಗಳು ಕಾಣುತ್ತವೆ. ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದ ಸಹಾಯದಿಂದ ಪಡೆದ ಚಿತ್ರಾಕೃತಿ. ಜಾನ್ ಇನ್ನ್ಸ್ ಸೆಂಟರ್ ಸಂಸ್ಥೆಯ ಕಿಮ್ ಫಿಂಡ್ಲೇ ಅವರು ಸೆರೆ ಹಿಡಿದಿರುವ ಚಿತ್ರ.
ಡಯಾನೆ ಸಾಂಡರ್ಸ್, ತಂಡದ ಮುಖಂಡರು: ಕೃಪೆ: ಮ್ಯಾಟ್ ಹೀಟನ್, ಜಾನ್ ಇನ್ನ್ಸ್ ಸೆಂಟರ್
ಸಾಮಾನ್ಯ ಬಾರ್ಬೆರ್ರಿ (ಬಾಗಿ ಸೂತ್ರ/ಕಸ್ತೂರಿ ಮಂಜಳ)(ಬರ್ಬೇರಿಸ್ ವಲ್ಗಾರಿಸ್) ಸಸ್ಯದ ಎಲೆಗಳ ಮೇಲೆ ʼಕಾಂಡ ತುಕ್ಕು ರೋಗʼದ ಸೋಂಕಿನಿಂದ ಮೂಡಿರುವ ಕಿತ್ತಳೆ ಬಣ್ಣದ ಆಕೃತಿಗಳು. ಕೃಪೆ: ಕ್ಲಾರ್ ಲೆವಿಸ್, ಜಾನ್ ಇನ್ನ್ಸ್ ಸೆಂಟರ್.
ʼಕಾಂಡ ತುಕ್ಕು ರೋಗಾಣುಗಳಿಂದ ಅತಿಯಾಗಿ ಸೋಂಕಿತಗೊಂಡಿರುವ ಗೋಧಿ ಗಿಡ ಕೃಪೆ: ಮ್ಯಾಟ್ ಹೀಟನ್, ಜಾನ್ ಇನ್ನ್ಸ್ ಸೆಂಟರ್
ʼಕಾಂಡ ತುಕ್ಕು ರೋಗದ ಸೋಂಕು ತಗುಲಿರುವ ಗೋಧಿ ಗಿಡದ ಕಾಂಡದಿಂದ ಹೊರಹೊಮ್ಮುತ್ತಿರುವ ಕಪ್ಪು ಕಣಗಳು. ಕೃಪೆ: ಆಂಡ್ರೂ ಡೇವಿಸ್, ಜಾನ್ ಇನ್ನ್ಸ್ ಸೆಂಟರ್.
ತುಕ್ಕು ರೋಗ ಸೋಂಕಿತ ಗೋಧಿ ಗಿಡದ ಎಲೆದಿಂದ ಹೊರಹೊಮ್ಮುತ್ತಿರುವ ಹಳದಿ ಕಣಗಳು. ಕೃಪೆ: ಆಂಡ್ರೂ ಡೇವಿಸ್, ಜಾನ್ ಇನ್ನ್ಸ್ ಸೆಂಟರ್.
ಬಾಗಿ ಸೂತ್ರ/ಕಸ್ತೂರಿ ಮಂಜಳದ ಎಲೆಯ ಮೇಲೆ, ಎಳೆಗಳ ರೂಪದಲ್ಲಿರುವ ಹೊರಹೊಮ್ಮಿರುವ ಕಾಂಡ ತುಕ್ಕು ರೋಗಾಣುವಿನ ಜನನಾಂಗದ ರಚನೆ (ಏಶಿಯಮ್), ಸ್ಕ್ಯಾನಿಂಗ್ ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದಿಂದ ಪಡೆದ ಪ್ರತಿರೂಪ: ಕೃಪೆ: ಕಿಮ್ ಫಿಂಡ್ಲೇ, ಜಾನ್ ಇನ್ನ್ಸ್ ಸೆಂಟರ್
ಗೋಧಿಯ ಎಲೆಯ ಹೊರ ಪದರವನ್ನು ಸೀಳುತ್ತಾ ಒಳಗಿಂದ ಹೊರಕ್ಕೆ ಆವರಿಸುತ್ತಿರುವ ಹಳದಿ ಬಣ್ಣದ ರಸ್ಟ್ ರೋಗಾಣುವಿನ ಕಣಗಳು: ಸ್ಕ್ಯಾನಿಂಗ್ ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದಿಂದ ಪಡೆದ ಪ್ರತಿರೂಪ:ಕೃಪೆ: ಕಿಮ್ ಫಿಂಡ್ಲೇ, ಜಾನ್ ಇನ್ನ್ಸ್ ಸೆಂಟರ್
ಸಂಶೋಧಕರ ಪರಿಚಯ
ಡಯಾನೆ ಸಾಂಡರ್ಸ್, ಕೃಷಿಗೆ ಹೆಚ್ಚು ಅಪಾಯಕಾರಿಯಾದ ಸಸ್ಯಗಳಿಗೆ ತಗಲುವ ರೋಗಾಣುಗಳನ್ನು ಕುರಿತಂತೆ ಸಂಶೋಧನೆ ನೆಡೆಸುತ್ತಿದ್ದಾರೆ. ರೋಗಾಣುಗಳು ಸಸ್ಯಗಳಿಗೆ ರೋಗವನ್ನು ಹೇಗೆ ತರುತ್ತವೆ ಎಂಬುದನ್ನು ಅರಿಯಲು, ಇವರ ತಂಡವು, ಬಹು ಆಯಾಮದಿಂದ ಸಸ್ಯ ರೋಗಾಣುಗಳ ಅಧ್ಯಯನವನ್ನು ನೆಡೆಸಿದ್ದಾರೆ.
ಇತ್ತೀಚೆಗೆ ಸಂಯುಕ್ತ ರಾಷ್ಟ್ರದ ಕೃಷಿಯ ಉತ್ಪನ್ನಗಳನ್ನು ಹಾಳು ಮಾಡಿದ, ಸಾಮಾನ್ಯವಾಗಿ ಗೋದಿಗೆ ತಗುಲುವ ಹಳದಿ ತುಕ್ಕು ರೋಗಾಣು ʼಪುಸಿನಿಯಾ ಸ್ಟ್ರಿಫಾರ್ಮಿಸ್,ಎಫ್.ಎಸ್.ಪಿ ಟ್ರಿಟಿಸಿʼ ಯನ್ನು ಒಳಗೊಂಡಂತೆ ಹಲವು ಸಂಶೋಧನೆಗಳನ್ನು ನೆಡೆಸಿದ್ದಾರೆ. ಪಶ್ಚಿಮ ಯೂರೋಪ್ ಪ್ರಾಂತ್ಯದಲ್ಲಿ ವೀಟ್ ರಸ್ಟ್ ರೋಗಾಣು ಮತ್ತೆ ಮರುಕಳಿಸ ಬಹುದೆಂದು ಅರಿತು, ಅದರ ಪರಿಹಾರಕ್ಕಾಗಿ ರೂಪಿಸಿರುವ ಯೋಜನೆಯ ಮುಂದಾಳತ್ವ ವಹಿಸಿದ್ದಾರೆ. ಡಯಾನೆ ಸಾಂಡರ್ಸ್ , ರೋಗಾಣುಗಳು ಹೇಗೆ ದುರ್ಬಲ ಸಸ್ಯಗಳ ಕಾಂಡಗಳಿಗೆ ನುಗ್ಗಿ ಸೋಂಕನ್ನು ಹರಡುತ್ತವೆ ಎಂಬುದರ ಬಗ್ಗೆ ಹೊಸ ಅರಿವು ಮೂಡಿಸಿದ್ದಾರೆ.